Monday 4 July 2011

ಯುದ್ಧ-ಭಯಂಕರ





ಪರ್ವವಾಯಿತೋ ಬಾಲಮನ್ಯುವಿನ ಮರಣವಾರ್ತೆಯಿಂ ಮುದಗೊಂಡು-ವೈರಿಗಡಣ....? ಉಹುಂ....ಇಲ್ಲ..ಖಂಡಿತವಾಗಿ......!!!
ಗರ್ವದಿಂ ರುಂಡಗಳ ಚೆಂಡಾಡಿದ ಅಭಿಮನ್ಯುವಿನ ನಿಸ್ತೇಜ-ಛಿದ್ರದೇಹದ ತುಣುಕುಗಳು,
ಸೆಟೆತವಳಿಯದೆ ಉಬ್ಬಿನಿಂತ ಸ್ನಾಯು-ಖಂಡಗಳು
ಮಾಗದ ಮಂದಹಾಸ-ಮರುತನ ಸೆಳೆವಿಗೆ ಬಳುಕುವ ಮುಂಗುರುಳು
ಬಿಗಿದ ಮುಷ್ಟಿಯೊಳ್ ಬಿಡಿಸಲಾಗದ ರಥದ-ಗಾಲಿಗಳು
ಸಿಗಿದ ಚರ್ಮದೊಳಗಿನಿಂ ಒಸರುತಿರ್ಪ ರಕ್ತ- ಕಂಡಕ್ಷಣದಲ್ಲಿ
ಸರ್ಪಕೇತನ ಸಂಶಯ ದಿಟವಾಯ್ತು-"ತಾನಿನ್ನು ಯುದ್ಧದಲಿ ಗೆಲ್ಲಲಾರೆ"







-

No comments:

Post a Comment